ಕ್ಯಾಲೆಂಡರ್

ಸಮೂಹಶಕ್ತಿ ಶಿವಪುರ ಬಳಗದಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಶಿವಪುರ ಗ್ರಾಮದ ಶ್ರೀ ಶಿವಕುಮಾರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು. ಎಂ ಶರತ್ ಕುಮಾರ್ ಪಾಟೀಲ್ ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಧ್ವಜಾರೋಹಣವನ್ನು ನಡೆಸಿಕೊಟ್ಟರು. ಪ್ರಗತಿಪರ ರೈತರಾದ ಶಿವಮೂರ್ತಿ ಲಿಂಗದಹಳ್ಳಿ ಇವರಿಗೆ ಸಮೂಹ ಶಕ್ತಿ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಮೂಹಶಕ್ತಿ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎನ್ ಬಿ ನಾಗರಾಜ್, ಸಮೂಹ ಶಕ್ತಿ ಅಧ್ಯಕ್ಷರಾದ ಎಂ ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪಿ ಆರ್ ಶಿವಕುಮಾರ್ ,ಎಸ್ ಮರಳು ಸಿದ್ದೇಶ್ವರ ,ಭಾರತಮ್ಮ ಶರಣಪ್ಪ ,ಎಸ್‌ ಕೆ ಬಸವರಾಜ್ ,ಮಂಜುಳಾ ಪರಮೇಶ್ವರ್, ಜಿ ಕೆ ಮಲ್ಲಿಕಾರ್ಜುನ್ , ಹಾಗೂ ಶಿವಪುರ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ..
ಸಮೂಹದ ಶಕ್ತಿ ಚನ್ನಗಿರಿ ಬಳಗದ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವವನ್ನು ವೀರ ಯೋಧ ಸಿ ಎಸ್ ಯೋಗರಾಜ್ ರವರ ಸ್ಮಾರಕ ಸ್ಥಳದಲ್ಲಿ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಶ್ರೀ ಗುರುಬಸವ ಸ್ವಾಮೀಜಿ ಗಳು ವಿರಕ್ತಮಠ ಪಾಂಡೋಮಟ್ಟಿ ನೆರವೇರಿಸಿದರು ಕೆ ಸಿ ರವಿ ತಾ ಪಂ ಸದಸ್ಯರು ಜಯಣ್ಣ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಗೊಪ್ಪೇನಹಳ್ಳಿ ಉಪಸ್ಥಿತರಿದ್ದರು ಸ್ವಾತಂತ್ರ್ಯಯೋಧ ಯೋಗರಾಜ್ ಅವರ ತಾಯಿ ಶಾರದಮ್ಮ ಯೋಧರಾದ ಸಿ ಎಸ್ ಲೋಕೇಶ್ ಗೊಪ್ಪೇನಹಳ್ಳಿ ರಂಗಸ್ವಾಮಿ ಮಲಹಾಳ್ ಇವರನ್ನು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಸಮೂಹಶಕ್ತಿ ಬಳಗದ ವತಿಯಿಂದ ಹಿರಿಯ ಸದಸ್ಯರಾದ ಸಿದ್ರಾಮಣ್ಣ ಚಿಕ್ಕಮಳಲಿ ರವಿ ಕಂಚಿಗನಹಾಳ್ ಸಿದ್ದಣ್ಣ ಮಾವಿನಹೊಳೆ ನಾಗರಾಜ್ ಬೆಂಕಿಕೆರೆ ಹನುಮಂತಪ್ಪ ಮಾಚನಾಯಕನಹಳ್ಳಿ ಸುರೇಶ್ ಕಾರಂತ್ ಕೊಟ್ರಪ್ಪ ಹೊದಿಗೆರೆ ಗಿರೀಶ್ ಶ್ಯಾಗಲೆ ಪ್ರಗತಿ ಶ್ರೀನಿವಾಸ್ ಚನ್ನಗಿರಿ ಕುಮಾರಸ್ವಾಮಿ ಕಂಚಿಗನಹಾಳ್ ಹಾಗೂ ರುದ್ರೇಶ್ವರ ಪ್ರೌಢಶಾಲೆಯ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.

ಪೊಥಲಕಟ್ಟೆ ಗ್ರಾಮದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಶ್ರೀಸಾಮಾನ್ಯನ ಪಾತ್ರ ಮತ್ತು ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ

17 DEC 2021...

ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರದ ಬದಲಾವಣೆಯನ್ನು ಅಧ್ಯಯನ ಮಾಡಲು ಅವರ ಸಹಬಾಳ್ವಿಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ, ಮತ್ತು. ಪಾತ್ರ, ಮತ್ತು ಮಾನವ ಹಕ್ಕುಗಳ ಗೌರವ ಮತ್ತು ಉತ್ತೇಜನ ಮತ್ತು ಉತ್ತೇಜಿಸುವಲ್ಲಿ ತಮ್ಮ ಪ್ರಾದೇಶಿಕ ಸ್ವಾತಂತ್ರ್ಯದ ಕಾರಣ ಹೋರಾಟ..

ಸಮಾಜದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಾಮಾನ್ಯ ನಾಗರಿಕನ ಪಾತ್ರ

01 OCT 2021...

ಇಂದು, ಪೌರತ್ವಕ್ಕೆ ಜನರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು ಮತ್ತು ಒಟ್ಟಿಗೆ ಕಾರ್ಯನಿರ್ವಹಿಸುವ ಮೂಲಕ ದ್ರಾವಣದ ಕಡೆಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಪಟ್ಟಿಯಲ್ಲಿ ಗುಲಾಮಗಿರಿ, ಮಹಿಳಾ ಮತದಾರರ ಹಕ್ಕು, ನಾಗರಿಕ ಹಕ್ಕುಗಳ ಚಳವಳಿ ಮುಂತಾದುವುಗಳನ್ನು ಒಳಗೊಂಡಿದೆ. ಪ್ರತಿಯೊಂದು ಸಂದರ್ಭದಲ್ಲಿ, ಜನರು ಸ್ವಯಂಪ್ರೇರಿತವಾಗಿ ಸಾಮಾನ್ಯ ಒಳ್ಳೆಯ ಉದ್ದೇಶಕ್ಕಾಗಿ ಹಂಚಿಕೊಂಡ ಅರ್ಥದಲ್ಲಿ ಸೇರಿಕೊಂಡರು..

ನಾಗರಕಟ್ಟೆ

10 APRIL 2021...

ಸಮೂಹ ಶಕ್ತಿ ಬಳಗ, ಗಹನ ಕೌಟುಂಬಿಕ ಮಾಸಪತ್ರಿಕೆ ಬೆಂಗಳೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ನಡೆಯಿತು. ಸಮೂಹ ಶಕ್ತಿಯ ಪ್ರಧಾನ ಪ್ರೇರಕರಾದ ದೀಪಕ್ ತಿಮ್ಮಯ ಅವರು ಹೆಣ್ಣು ಮಕ್ಕಳನ್ನು ಚಂಡಿ ಚಾಮುಂಡಿಗೆ ಹೋಲಿಸಿ ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ಸಮಾಜದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು, ದೇವರು ಎಲ್ಲಿಯೂ ಮಾತನಾಡಿದ ಇತಿಹಾಸವೇ ಇಲ್ಲ ಆದ್ದರಿಂದ ಆಕೆಯೂ ಅವಳ ಹಕ್ಕಿನ ಕುರಿತಾಗಿ ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ಹೆಣ್ಣು ಶಿಕ್ಷಿತಳಾದರೆ ಮಾತ್ರ ಸಮಾಜದ ಉದ್ದಾರ ಸಾಧ್ಯ ಮತ್ತು ವಿಶ್ವ ಮಹಿಳಾ ದಿನಾಚರಣೆ ಯಾಕೆ ಹುಟ್ಟಿಕೊಂಡಿತು ಮತ್ತು ಮಹಿಳಾ ಓಟಿನ ಹಕ್ಕಿನ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿ ಮಹಿಳೆಯರನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಮತ್ತೊರ್ವ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಟೀ. ಶಾರದಮ್ಮ ಮಾತನಾಡಿ, ಮಹಿಳಾ ಹಕ್ಕುಗಳ ಬಗ್ಗೆ ಹಾಗು ಸ್ತ್ರೀಯರೂ ಗಂಡಸರಂತೆ ಸಮಾನರು, ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆಯಬಾರದು ಎಂದು ಹೇಳಿದರು. ಸಮಾಜ ಸೇವಕ ತುಂಬಿನಕೆರೆ ಬಸವರಾಜ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಇರುವ ಆದ್ಯತೆ ಹಾಗು ಸರ್ಕಾರದಿಂದ ಸಿಗುತ್ತಿರುವ ಉದ್ಯೋಗ ಮೀಸಲಾತಿಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ತಮ್ಮಿಂದ ಸಿಗಬೇಕಾದ ಸಮಾಜಸೇವೆಯ ಕುರಿತು ಮಾತನಾಡಿದರು. ಶೈಕ್ಷಣಿಕವಾಗಿ ಆಕೆ ಬಲವಾದಷ್ಟು ಮನೆ ಮತ್ತು ಸಮಾಜ ಎರಡೂ ಬಲಿಷ್ಟವಾಗುವುದು ಎಂದು ಹೇಳಿದರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಹೆಬ್ಬಳ್ಳಿ, ದೇವಿಗೆರೆ ಹಾಗು ಮಲ್ಲಪ್ಪನಹಳ್ಳಿ ಗ್ರಾಮ ಪಂಚಾಯತಿ ವ್ತಾಪ್ತಿಯಲ್ಲಿ ಬರುವ ಒಟ್ಟು 43 ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸಂಕಷ್ಟ ಸಮಯದಲ್ಲಿ ಅವರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಪೂರ್ವ ಮಂಜುನಾಥ್, ಸ್ತ್ರೀ ಶಕ್ತಿ ಒಕ್ಕೂಟಗಳ ಅಧ್ಯಕ್ಷೆ ರೂಪ, ಹೆಬ್ಬಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರತ್ನಮ್ಮ, ಗ್ರಾಮ ಪಂಚಾಯತ್ ಸದಸ್ಯ ರಾಜಾಹುಲಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ

27 MARCH 2021...

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯದಲ್ಲಿ ದಾವಣಗೆರೆ ಸಮೂಹ ಶಕ್ತಿ ತಂಡವು ಫೈನಲ್ ತಲುಪಿ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ತೀವ್ರ ಕುತೂಹಲ ಮೂಡಿಸಿದ್ದ ಅಂತಿಮ ಸುತ್ತಿನ ಪಂದ್ಯದಲ್ಲಿ ದಾವಣಗೆರೆ ಸಮೂಹ ಶಕ್ತಿ ತಂಡದ ಆಟಗಾರರು ಬಸಾಪುರ ಹನುಮನಹಳ್ಳಿ ತಂಡದ ವಿರುದ್ಧ ಗೆದ್ದು 25 ಸಾವಿರ ನಗದು ಹಾಗು ಟ್ರೋಫಿಯನ್ನು ಪಡೆದರು. ಎರಡನೇ ಸ್ಥಾನವನ್ನು ಸ್ಥಳೀಯ ಹನುಮನಹಳ್ಳಿ ತಂಡದ ಆಟಗಾರರು 15ಸಾವಿರ ನಗದು ಹಾಗು ಟ್ರೋಫೀಯನ್ನು ಗಳಿಸಿದರು. ದಾವಣಗೆರೆ ತಂಡದ ಅಂಜು ನಾಯ್ಕ್ ತಂಡಕ್ಕೆ ಉತ್ತಮ ಅಂಕಗಳನ್ನು ತಂದುಕೊಡುವುದರ ಮೂಲಕ ಗೆಲುವಿಗೆ ಕಾರಣವಾದರು. ಆಟದಲ್ಲಿ ಮೂರನೇ ಸ್ಥಾನವನ್ನು ಕಡ್ಲಬಾಳ ತಂಡ ಪಡೆದು 10 ಸಾವಿರ ರೂಪಾಯಿ ನಗದನ್ನು ಪಡೆದುಕೊಂಡಿದೆ. ಮತ್ತು ನಾಲ್ಕನೇ ಸ್ಥಾನವನ್ನು ಟಿಬಿ ಡ್ಯಾಮ್ ತಂಡ ಪಡೆದುಕೊಂಡಿದೆ. ಹನುಮನಹಳ್ಳಿ ತಂಡದ ಆಟಗಾರರಾದ ದೇವರಾಜ್ ಹಾಗು ರವಿಕುಮಾರ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದರು. ಈ ರೋಚಕ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಸ್ಮೇಯೋರ್ ಕಂಪೆನಿಯ ಆದಿತ್ಯ ಅವರು ನಾಲಕ್ಕೂ ತಂಡಗಳಿಗೆ ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

ರಾಷ್ಟ್ರೀಯ ಯುವ ದಿನಾಚರಣೆ

12 JAN 2021...

ಜನವರಿ 12 ರಂದು ರಾಷ್ಟ್ರೀಯ ಯುವ ದಿನಾಚರಣೆಯನ್ನು ಪ್ರತಿವರ್ಷವೂ ಭಾರತದ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದ ಅವರ ಉಪನ್ಯಾಸಗಳು ಮತ್ತು ಬರಹಗಳು, ಭಾರತೀಯ ಆಧ್ಯಾತ್ಮಿಕ ಸಂಪ್ರದಾಯ ಮತ್ತು ಅವರ ಗುರು ಶ್ರೀರಾಮ ರಾಮಕೃಷ್ಣ ಅವರ ವಿಶಾಲವಾದ ದೃಷ್ಟಿಕೋನದಿಂದ ಹುಟ್ಟಿಕೊಂಡಿರುವ ಸ್ಫೂರ್ತಿಯ ಮೂಲವಾಗಿದೆ ಮತ್ತು ಅನೇಕ ಯುವ ಸಂಘಟನೆಗಳು, ಅಧ್ಯಯನ ವಲಯಗಳು ಮತ್ತು ಯುವಕರನ್ನು ಒಳಗೊಂಡಿರುವ ಸೇವಾ ಯೋಜನೆಗಳನ್ನು ಪ್ರೇರೇಪಿಸಿವೆ.

ಚರ್ಚೆ ಮತ್ತು ಸಮಾಲೋಚನೆ ಕಾರ್ಯಕ್ರಮ

08 JAN 2021...

ಪ್ರಮುಖ ಚರ್ಚೆಯನ್ನು ಸುಲಭಗೊಳಿಸಲು, ಪ್ರತಿಯೊಬ್ಬರೂ ತೊಡಗಿಸಿಕೊಳ್ಳಲು ಮತ್ತು ರಾಜ್ಯದ ಭವಿಷ್ಯದ ಸಂಭಾಷಣೆಗೆ ಕೊಡುಗೆ ನೀಡಲು ಸಮಗ್ರವಾದ ರಾಜ್ಯ-ವ್ಯಾಪಕ ಸಮಾಲೋಚನೆ ಕಾರ್ಯಕ್ರಮವು ನಡೆಯುತ್ತಿದೆ.

5ನೇ ನವೆಂಬರ್ 2016

ಮಾನವ ಹಕ್ಕುಗಳ ಬಗ್ಗೆ ಕಾರ್ಯಗಾರ

1ನೇ ಅಕ್ಟೋಬರ್ 2016

ಸಮಾಜದ ಸ್ವಾಸ್ಥ ಕಾಪಾಡುವುದರಲ್ಲಿ ಸಾಮಾನ್ಯ ನಾಗರೀಕನ ಪಾತ್ರ’ಎನ್ನುವ ವಿಚಾರದ ಬಗ್ಗೆ ಕಾರ್ಯಾಗಾರ

12ನೇ ಜನವರಿ 2017

ರಾಷ್ಟ್ರೀಯ ಯುವ ಜನ ದಿನ ಆಚರಣೆ

8ನೇ ಜನವರಿ 2017

ಚರ್ಚೆ ಮತ್ತು ಸಮಾಲೋಚನೆ ಕಾರ್ಯಕ್ರಮ

20ನೇ ಮಾರ್ಚ್ 2017

ಸಾಮಾಜಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು

8ನೇ ಮಾರ್ಚ್ 2017

ವಿಶ್ವ ಮಹಿಳಾ ದಿನಾಚರಣೆ

20ನೇ ಫೆಬ್ರವರಿ 2017

ಸಾಮಾಜಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು

20ನೇ ಜನವರಿ 2017

ಸಾಮಾಜಿಕ ಹಿತಾಸಕ್ತಿ ಅರ್ಜಿ ಹಾಕುವುದು